ಮನೆ ಅಡವಿಟ್ಟು ಬಡವರ ನೆರವಿಗೆ ನಿಂತ ಗ್ರಾಪಂ ಸದಸ್ಯ

ಮನೆ ಅಡವಿಟ್ಟು ಬಡವರ ನೆರವಿಗೆ ನಿಂತ ಗ್ರಾಪಂ ಸದಸ್ಯ

ಚಿಕ್ಕೋಡಿ : 
ಕೊರೋನಾ ವೈರಾಣು ತಡೆಗಟ್ಟಲು ಹೇರಲಾದ ಲಾಕ್‍ಡೌನ್‍ನಿಂದ ಕಂಗೆಟ್ಟಿರುವ ಬಡ, ಕೂಲಿ ಹಾಗೂ ನಿರ್ಗತಿಕರ ಕುಟುಂಬಗಳ ನೆರವಿಗೆ ಧಾವಿಸಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟಿದ್ದಾರೆ. ತನ್ಮೂಲಕ ಈ ಗ್ರಾಪಂ ಸದಸ್ಯ ಇತರೆ ಚುನಾಯಿತಿ ಪ್ರತಿನಿಧಿಗಳಿಗೆ ಮಾದರಿಯಾಗಿ ಮಾನವೀಯತೆ ಮೆರೆದಿದ್ದಾರೆ.


ಹೌದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯ ಮೇಲೆ ಸಾಲ ಮಾಡಿ ಬಡವರಿಗೆ ದಿನಸಿ ವಸ್ತುಗಳ ಕಿಟ್‍ಗಳನ್ನು ನೀಡಿದ್ದಾರೆ. ತನ್ಮೂಲಕ ಬಡವರಲ್ಲಿ ಆತ್ಮಸ್ಥೈರ್ಯ ತುಂಬಿದ ಈ ಗ್ರಾಪಂ ಸದಸ್ಯನ ಕಾರ್ಯವೈಖರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.


ಲಾಕ್‍ಡೌನ್ ಹೇರಿ ಸುಮಾರು ಎರಡು ತಿಂಗಳು ಸಮೀಪಿಸುತ್ತಿದ್ದರೂ ಇದುವರೆಗೆ ಕ್ಷೇತ್ರದ ಸಂಸದ, ಶಾಸಕರು ಗ್ರಾಮದತ್ತ ಸುಳಿಯುತ್ತಿಲ್ಲ. ಜೊತೆಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇದರಿಂದ ಅನೇಕ ಬಡ ಕುಟುಂಬಗಳ ಹಸಿದ ಹೊಟ್ಟೆಗೆ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಇದನ್ನೆಲ್ಲಾ ಗಮನಿಸಿದ ಗ್ರಾಪಂ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯನ್ನೇ ಅಡವಿಟ್ಟು ಸುಮಾರು 40 ಸಾವಿರ ಮೌಲ್ಯದ ವಿವಿಧ ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಿ ಸಹೃದಯ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ. 


ಬಾಕ್ಷ ಲೈನ್  : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಮಾಹಾಮಾರಿ  ವೈರಸ್ ಬಂದು ನಮ್ಮ ಗ್ರಾಮದ ಜನರು ದಿಕ್ಕೂ ತಪಿಸಿದೆ ದಿನನಿತ್ಯ ಕೂಲಿ ಕೆಲಸ ಮಾಡಿ  ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು   ಲಾಕ್ ಡೌನ್ ಯಾರು ಕೆಲಸಕ್ಕೆ ಹೋಗುತ್ತಿಲ್ಲ  ಯಾರಾದರೂ ಜನ ಪ್ರತಿನಿಧಿಗಳು ಬಂದು ಸಹಾಯ ಮಾಡುತ್ತಾರೆ ಎಂದರೆ ಯಾರೂ ಬರುತ್ತಿಲ್ಲ ಗ್ರಾಮದ ಜನರು ನನ್ನ ಮನೆಗೆ ಬಂದು ಮನೆಯಲ್ಲಿ ಎಣ್ಣೆ  ,ಕಾರು ,ಉಪ್ಪು  ಇಲ್ಲ ನಮ್ಮಗೆ ಏನಾದರೂ ಸಹಾಯ ಮಾಡಿಸಿ ಎಂದಾಗ ನಾನು ನನ್ನ ಸ್ವಂತ ಮನೆಯನ್ನು ಬೆರೆಯವರಿಗೆ ಅಡವಿಟ್ಟು ೪೦,೦೦೦ ಹಣ ಸಾಲ ಪಡೆದು ಗ್ರಾಮದ ಬಡ ಜನರಿಗೆ ದಿನಸಿ ಕಿಟ್ಟ ವಿತರಣೆ ಮಾಡಲಾಯಿತು ಎಂದು 
ಶ್ರೀನಿವಾಸ ವ್ಯಾಪಾರಿ – ಗ್ರಾ.ಪಂ ಸದಸ್ಯ(ದಾನಿಗಳು)
Share
WhatsApp
Follow by Email