ಮೂಡಲಗಿ ಕೋರ್ಟ್ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ

ಮೂಡಲಗಿ ಕೋರ್ಟ್ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ

ಮೂಡಲಗಿ : 12ನೇ ಶತಮಾನದಲ್ಲಿ ಜಾತಿ ಭೇದವನ್ನು ಅಂಧಾನುಕರಣೆ ಎಲ್ಲ ವಿಶೇಷವಾದ ಕಾಲದಲ್ಲಿ ಇಂತಹ ಸಾಮಾಜಿಕ ಅನಿಷ್ಟದ ವಿರುದ್ಧ ಕ್ರಾಂತಿಯನ್ನು ಆರಂಭಿಸಿದವರು ಬಸವಣ್ಣನವರು ಎಂದು ಹಿರಿಯ ನ್ಯಾಯವಾದಿ ಎ. ಕೆ. ಮದಗಣ್ಣವರ ಹೇಳಿದರು

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ಬಸವಣ್ಣನವರ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಅಂತರ್ಜಾತಿ ವಿವಾಹ ಜಾರಿಗೆ ತಂದರು, ಬಸವೇಶ್ವರ ದೃಷ್ಟಿಯಲ್ಲಿ ಇಡೀ ಮಾನವ ಜನಾಂಗವೇ ಒಂದು ಕುಟುಂಬವಿದ್ದಂತೆ ಯಾವುದೇ ತಾರತಮ್ಯವಿಲ್ಲದೆ ಜಾತಿಭೇದವನ್ನು ಖಂಡಿಸಿ, ಸಕಲರಿಗೂ ಲೇಸನ್ನೇ ಬಯಸಿದವರು ಬಸವಣ್ಣನವರು ಎಂದು ಹೇಳಿದರು.
ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆ ನಮ್ಮ ಭಾರತ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ ಆದ್ದರಿಂದ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನ್ಯಾಯವಾದಿ ಸಂಘದ ಮಾಜಿ ಮಹಿಳಾ ಪ್ರತಿನಿಧಿ ಶಿಲ್ಪಾ ಗೌಡಿಗೌಡರ ಮಾತನಾಡಿ, ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆ ಎಲ್ಲಿ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರು ಹಾಗೂ ಬಸವಣ್ಣನವರು ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಸ್ಥಾನವನ್ನು ಕಲ್ಪಿಸಿ ಕೊಟ್ಟಿರುವುದಕ್ಕೆ ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ ಶರಣೆ ಅಕ್ಕಮಹಾದೇವಿಯವರು ಹಾಗೂ ಇತರೆ ಶರಣೆಯರು ಸಾಕ್ಷಿಯಾಗಿದ್ದಾರೆ. ಬಸವಣ್ಣನವರು ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ತತ್ವ, ಸ್ತ್ರೀ ಸಮಾನತೆ ವೈಚಾರಿಕ ಚಿಂತನೆ ಜಾತ್ಯತೀತ ಸಮಾಜದ ಕಲ್ಪನೆ, ದಯವೇ ಧರ್ಮದ ಮೂಲ, ನಡೆ-ನುಡಿಯಲ್ಲಿ ಸಮನ್ವಯತೆ, ಸಮಾಜದ ನೈಜ್ಯ ದರ್ಶನ, ದೇಹವೇ ದೇವಾಲಯ ಹೀಗೆ ಹಲವಾರು ಪರಿಕಲ್ಪನೆಗಳ ಮೇಲೆ ಬಸವಣ್ಣನವರ ವಚನಗಳ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಹೇಳಿದರು.

ಬಿ ವೈ ಹೆಬ್ಬಾಳ ಮಾತನಾಡಿ, ಕೊರೋನಾ ವೈರಸ್ ಹಿನ್ನೆಲೆ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಕಾರದ ಆದೇಶದಂತೆ ಅತಿ ಸರಳ ರೀತಿಯಲ್ಲಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು, ನ್ಯಾಯಾಲಯದ ಆವರಣದಲ್ಲಿ ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರಾದ
ಎಸ್.ಎಸ್.ಗೌಡಿಗೌಡರ, ಆರ್. ಬಿ. ಮಮದಾಪುರ, ಐ. ಎಮ್. ಹಿರೇಮಠ್, ಎಲ್. ಬಿ. ವಡರ್, ಆರ್. ಬಿ. ಪತ್ತಾರ್, ಎ. ಎಸ್. ಕೌಜಲಗಿ, ಎನ್. ಬಿ. ನೇಮಗೌಡರ್, ಎಸ್. ವೈ. ಸಣ್ಣಕ್ಕಿ, ಎಮ್. ಪಿ ಅರಸಪ್ಪಗೋಳ, ಉಪಸ್ಥಿತರಿದ್ದರು
Share
WhatsApp
Follow by Email