ನಿಪ್ಪಾಣಿಯಲ್ಲಿ ಸರಳವಾಗಿ ಬಸವ ಜಯಂತಿ

ನಿಪ್ಪಾಣಿಯಲ್ಲಿ ಸರಳವಾಗಿ ಬಸವ ಜಯಂತಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ  ಸಚಿವರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆಯ ಸಂಸದ ಅಣ್ಣಾಸಾಹೇಬ ಜೊಲ್ಲೆ  ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಿಪ್ಪಾಣಿಯ  ನಗರಸಭೆಯಲ್ಲಿ ಹಾಗೂ ಜಾತ್ರಾಟ ವೇಸನಲ್ಲಿ  ಬಸವ ಜಯಂತಿ ಅಂಗವಾಗಿ ವಿಶ್ವದ ಮೊದಲ ಪ್ರಜಾಪ್ರಭುತ್ವ ದ ಜನಕ, ಮಹಾ ಮಾನವತಾವಾದಿ , ಸಮಾನತೆಯ ಸಂದೇಶ ಸಾರಿದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿ ಗೆ ಮಾಲಾರ್ಪಣೆ ಮಾಡಿ, ಗೌರವ  ಸಲ್ಲಿಸಿದರು.
ಈ ಸಂದರ್ಭದಲ್ಲಿ  ಪೌರಾಯಕ್ತರಾದ   ಮಹಾವೀರ ಬೋರನ್ನವರ, ತಹಶೀಲ್ದಾರ  ಪ್ರಕಾಶ ಗಾಯಕವಾಡ, ಬಿಜೆಪಿ ನಗರಾಧ್ಯಕ್ಷ ಶ್ರೀ ಪ್ರಣವ ಮಾನವಿ, ಹಾಲಸಿದ್ಧನಾಥ ಸಕ್ಕರೆ ಕಾಖಾ೯ನೆ ಅಧ್ಯಕ್ಷ ರಾದ ಚಂದ್ರಕಾಂತ ಕೋಟಿವಾಲೆ, ಹಾಗೂ ನಗರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
Share
WhatsApp
Follow by Email