ಬಡ ಕುಟುಂಬಗಳಿಗೆ ತಿಂಗಳ ಪಡಿತರ ಉಚಿತವಾಗಿ ವಿತರಿಸಿದ ಸಂತೋಷ ಸಾವಡಕರ ಕುಟುಂಬ

ಅಥಣಿ: ಭಾರತ ಲಾಕ್ ಡೌನ ಇಂದು ಇಪ್ಪತ್ತೆಂಟನೆಯ ದಿನಕ್ಕೆ ಮುಂದುವರೆದಿದ್ದು ಬಡವರು ನಿರ್ಗತಿಕರಿಗೆ ಅಲ್ಲಲ್ಲಿ ಕೆಲವು ಸಂಘ ಸಂಸ್ಥೆಗಳು ಆಹಾರ ವಿತರಣೆ ಮಾಡುತ್ತಿವೆ.
ಆದರೆ ಕೂಲಿ ಕಾರ್ಮಿಕರು ಬಡವರು ಮತ್ತು ನಿರ್ಗತಿಕರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದ್ದು ಅವಶ್ಯಕತೆ ಇರುವ ಕುಟುಂಬಗಳಿಗೆ ಅಕ್ಕಿ, ಬೇಳೆ, ಪಾಮ್ ಆಯಿಲ್, ಶೇಂಗಾ, ಅವಲಕ್ಕಿ, ಸೇರಿದಂತೆ ಒಂದು ತಿಂಗಳಿಗೆ ಆಗುವಷ್ಟು ದಿನಬಳಕೆಯ ವಸ್ತುಗಳನ್ನು ಸಂತೋಷ ಸಾವಡಕರ ಮತ್ತು ಕುಟುಂಬ ಸದಸ್ಯರು ಅಥಣಿ ಪಟ್ಟಣದ ಶಂಕರ ನಗರದ ಜೋಪಡಿ ನಿವಾಸಿಗಳಿಗೆ ಸೇರಿದಂತೆ ಏಳುನೂರಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಸಂತೋಷ ಸಾವಡಕರ ಯಾವುದೇ ಪ್ರಚಾರದ ಉದ್ದೇಶದಿಂದ ಅಥವಾ ಸ್ವಾರ್ಥದಿಂದ ನಾವು ಪಡಿತರ ವಿತರಣೆ ಮಾಡುತ್ತಿಲ್ಲ ಮನುಷ್ಯ ಜೀವನದಲ್ಲಿ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವದಿಲ್ಲ. ನಾವು ಕೂಡಿಟ್ಟ ಹಣ ಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬರಬೇಕು ಅನ್ನುವದು ನಮ್ಮ ಹಿರಿಯರ ಆಶಯ. ಉಳಿದವರು ಕೂಡ ನಾವು ಕೊಡುವದನ್ನು ನೋಡಿ ಮತ್ತಷ್ಟು ಬಡಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಈಗಾಗಲೇ ಹಲವಾರು ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದು ಅಗತ್ಯ ಇರುವ ಕುಟುಂಬಗಳಿಗೆ ಮತ್ತಷ್ಟು ಸಹಾಯ ಮಾಡುವ ಉದ್ದೇಶ ಇದೆ ಎಂದು ಹೇಳಿದರು.
ಈ ಮೊದಲು ಕೂಡ ಬರಗಾಲದ ಸಂಧರ್ಭದಲ್ಲಿ ಹಲವಾರು ವಾರ್ಡಗಳಲ್ಲಿ ಮತ್ತು ಹಳ್ಳಿಗಳಿಗೂ ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆ ಮಾಡಿದ್ದ ಸಂತೋಷ ಸಾವಡ್ಕರ ಮತ್ತು ಕುಟುಂಬದವರ ಈ ಕಾರ್ಯ ಸದ್ಯ ಜನರ ಮೆಚ್ಚುಗೆಗೆ ಕಾರಣವಾಗಿದ್ದು ಮತ್ತಷ್ಟು ಆರ್ಥಿಕ ದುರ್ಬಲರಿಗೆ ಹಾಗೂ ಬಡವರಿಗೆ ಇನ್ನಷ್ಟು ಜನರು ಸಹಾಯ ಹಸ್ತ ಚಾಚಲು ಮಾದರಿ ಆಗಿದ್ದು ಸಾವಡ್ಕರ ಕುಟುಂಬದ ಸಾಮಾಜಿಕ ಕಾರ್ಯಕ್ಕೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಸುಮೀತ ಸವದಿ, ಸುಶಾಂತ ಸಾಲುಕೆ, ಅಬೆಯ್ಯ ಸಗರಿ, ಸಚಿನ ಮಿರಜಿ, ಅನೀಲ ಮಾಹಾಜನ, ಅರುಣ ದೊಡ್ಡನವರ, ಇಮ್ರಾನ್ ಗಡ್ಡೆಕರ, ಇನೊ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email