ಜಮಖಂಡಿ : ಸೊಂಕು ತಗುಲಿದ ಹಿನ್ನಲೆಯಲ್ಲಿ ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆ ಸೇರಿದಂತೆ ಆಂಬುಲೇನ್ಸ್ಗಳಿಗೆ ರಾಸಾಯಣಿಕ ಸಿಂಪಡನೆ

ಜಮಖಂಡಿ: ಕಿಲ್ಲರ್ ಕೊರೊನಾ ಅಟ್ಟಹಾಸಕ್ಕೆ ನಗರದಲ್ಲೆ ಮೂವರಿಗೆ ಸೊಂಕು ತಗುಲಿದ ಹಿನ್ನಲೆಯಲ್ಲಿ ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆ ಸೇರಿದಂತೆ ಆಂಬುಲೇನ್ಸ್ಗಳಿಗೆ ರಾಸಾಯಣಿಕ ಸಿಂಪಡಿಸಿ ಸ್ವಚ್ಚಗೊಳಿಸಿದರು.
ನಗರದಲ್ಲಿನ ಇಬ್ಬರಿಗೆ ಕೊರೊನಾ ಸೊಂಕಿನ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಸುಮಾರು 61 ಜನರಿಗೆ ಕೊರಾಂಟೈನ್‌ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊರೊನಾ ಲಕ್ಷಣಗಳಿರುವ ಸುಮಾರು 15 ಜನರ ಮಾದರಿಯನ್ನು ಪರೀಕ್ಷೆಗೆ ತಾಲೂಕಾ ಆರೋಗ್ಯಾಧಿಕಾರಿಗಳು ಕಳುಹಿಸಿಕೊಡಲಾಗಿದ್ದು ವರದಿ ಬರಬೇಕಾಗಿದೆ.
ರೋಗಿಗಳ ಪರದಾಟ: ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ಬಂದ ಇರುವ ಕಾರಣ ವಿವಿಧ ಕಾಯಿಲೆಗಳಿರುವ ರೋಗಿಗಳು ಪರದಾಡುವಂತಾಗಿದೆ, ಅದರಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆಂದು ಹೋದರೆ ಅಲ್ಲಿನ ವೈದ್ಯರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ರೋಗಿಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ.
ಸರ್ಕಾರಿ ವೈದ್ಯರ ಸೇವೆ: ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು, ದಾದಿಯರು, ಸಿಬ್ಬಂದಿಗಳು ಕೊರೋನಾ ಭಿತಿಯಲ್ಲೂ ಆಸ್ಪತ್ರೆಗೆ ಬರುವ ರೋಗಿಗಳೀಗೆ ಉತ್ತಮ ಸೇವೆ ನೀಡುತಿದ್ದಾರೆ.
ನಿಷೇಧಿತ ಪ್ರದೇಶ:
ನಗರದಲ್ಲಿ ಶನಿವಾರ ಎರಡು ಸೋಂಕು ಪತ್ತೆ ಹಿನ್ನೆಲೆಯಲ್ಲಿ ನಗರದ ಭಾರಪೇಟ ಗಲ್ಲಿ ಮತ್ತು ಅವಟಿ ಗಲ್ಲಿಯ ಪ್ರದೇಶವನ್ನು ಕಂಟೈನ್ಮೆAಟ ಝೋನ ನಿರ್ಭಂದಿತ ಪ್ರದೇಶವೆಂದು ಗೋಷಿಸಿದ ಹಿನ್ನೆಲೆಯಲ್ಲಿ ಜನತೆಗೆ ತಿರುಗಾಡಲು ಪ್ರವೇಶವನ್ನು ಸಂಪೂರ್ಣವಾಗಿ ನಿರ್ಭಂದಿಸಿದೆ, ಈ ನಿರ್ಬಂದಿತ ಪ್ರದೇಶದಲ್ಲಿ ತಿರುಗಾಡಬಾರದು ಅಲ್ಲಿಯ ನಿವಾಸಿಗಳಿಗೆ ದಿನಸಿ ಮತ್ತು ಇನ್ನಿತರ ನಿತ್ಯೋಪಯೋಗಿ ಸಮಾನುಗಳನ್ನು ಮನೆ ಮನೆಗೆ ಪೂರೈಸಲಾಗುವದು ಎಂದು ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.
ಬಂದು ಪರೀಕ್ಷಿಸಿಕೊಳ್ಳಿ:
ನಗರದ ಹಳೇ ತಹಶೀಲ್ದಾರ ಕಚೇರಿಯ ಹತ್ತಿರದÀ ಭಾರತೀಯ ಸ್ಟೇಟ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಒಬ್ಬರಿಗೆ ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಏ. 13 ರ ಮಧ್ಯಾಹ್ನ 1.30 ರಿಂದ ಏ.15ರ ಮಧ್ಯಾಹ್ನ 1.30 ರವರೆಗೆ ಈ ಬ್ಯಾಂಕಿನ ಎಟಿಎಮ್ ಶಾಖೆಯಲ್ಲಿ ಹಣ ಡ್ರಾ ಮಾಡಿದವರು ತಾಲೂಕಾ ಆರೋಗ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು, ಅಥವಾ ಅವರೆಲ್ಲರೂ ಸ್ವಯಂ ಪ್ರೇರಿತರಾಗಿ ಹೋಮ ಕ್ವಾರೆಂಟೈನನಲ್ಲಿ ಇರಬೇಕು ಎಂದು
ಎಸಿ ಡಾ. ಸಿದ್ದು ಹುಲ್ಲೋಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share
WhatsApp
Follow by Email