ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮೈಧಾನದಲ್ಲಿ ಸುರಕ್ಷತೆಯ ಅಂತರದದಲ್ಲಿ ತರಕಾರಿ ಮಾರಲು ವ್ಯವಸ್ಥೆ.

ಮುಗಳಖೋಡ: ಕೋರೊನ ವೈರಸ್ ಮಹಾಮಾರಿಯ ಪರಿಣಾಮ ಇಡಿ ದೇಶವೇ ಸ್ಥಬ್ದಗೊಂಡಿರುವ ಸಂದರ್ಭದಲ್ಲಿ ಪಟ್ಟಣದ ಮಧ್ಯಭಾಗದಲ್ಲಿರುವ 2ನೇ ವಾರ್ಡಿನ ಇಕ್ಕಟ್ಟಾದ ಬಸವೇಶ್ವರ ದೇವಸ್ಥಾನದಿಂದ ಪತ್ರಕರ್ತ ಘಟನಟ್ಟಿ ಯವರ ಮನೆಯವರೆಗೆ ಜನರು ತರಕಾರಿ ಹಾಗೂ ದಿನಸಿಗಾಗಿ ಪರದಾಡುವಂತ್ತಾಗಿತ್ತು. ಇದು ಅಸುರಕ್ಷತೆಯನ್ನು ಉಂಟುಮಾಡುವದರ ಜೊತೆಗೆ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣ ಮಾಡುವಂತ್ತಾಗಿತ್ತು. ಈ ವ್ಯವಸ್ಥಗೆ ಭಯಭೀತರಾದ ಜನ ಸಂತೆಯನ್ನು ಸ್ಥಳಾಂತರಿಸುವoತ್ತೆ ಪುರಸಭೆಗೆ ಮನವಿಮಾಡಿಕೊಂಡಿದನ್ನು ಸ್ಮರಿಸಬಹುದು. ಮುಖ್ಯಾಧಿಕಾರಿ ಹಾಗೂ ಪುರಸಭೆ ಸದಸ್ಯರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮೈಧಾನದಲ್ಲಿ ಪುರಸಭೆ ಸಿಬ್ಬಂದಿಯವರು ಅಚ್ಚ್ವುಕಟ್ಟಾಗಿ ಮಾರ್ಕಿಂಗ ಹಾಗೂ ಚೌಕ್ ಬಾಕ್ಷಗಳನ್ನು ಹಾಕಿ ಸುರಕ್ಷತೆಯ ಸಾಮಾಜಿಕ ಅಂತರದಲ್ಲಿ ತರಕಾರಿ ಮಾರಲು ಅನುಮಾಡಿಕೊಟ್ಟರು.
ಕಿರಾಣಿ ಅಂಗಡಿಗಳಿಗೆ ಮುಗಿಬಿಳ್ಳುತ್ತಿರುವ ಜನರು:
ಇದಕ್ಕೆ ಅಪವಾದವೆಂಬoತೆ ಪಟ್ಟಣದ ಅಂಗಡಿಗಳ ಮಾಲಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಜನರು ಬೆಳಿಗ್ಗೆ 6 ಗಂಟ್ಟೆಯಿoದ 10 ಗಂಟೆಯವರೆಗೆ ಒಬ್ಬರಮೇಲೊಬ್ಬರು ಮುಗಿಬಿದ್ದು ಕಿರಾಣಿ ದಿನಸಿ ವಸ್ತುಗಳನ್ನು ಪಡೆಯುತ್ತಿರುವುದು ಆತಂಕ ಹಾಗೂ ಭಯಬೀಳುವಂತ್ತಾಗಿದೆ. ಅಲ್ಲದೆ ಕೆಲ ಅಂಗಡಿಗಳಲ್ಲಿ ಯೊಗ್ಯ ಧರದಲ್ಲಿ ನೀಡದೆ ದಿನಸಿವಸ್ತುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತಿದ್ದಾರೆಂದು ಜನರು ಆರೋಪಗಳು ಕೇಳಿಬರುತ್ತಿವೆ. ಇದರಿಂದ ದಿನದ ಕೂಲಿನಾಲಿ ಮಾಡಿ ಬಧುಕುವ ಬಡಜನರಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಕೂಡಲೇ ಅಂಗಡಿ ಮಾಲಿಕರಿಗೆ ಕಟ್ಟುನಿಟ್ಟಾಗಿ ಯೋಗ್ಯ ಧರದಲ್ಲಿ ದಿನಸಿವಸ್ತುಗಳನ್ನು ನೀಡುವಂತೆ ಅಂಗಡಿಯ ಮಾಲೀಕರಿಗೆ ಹೇಳುವ ಕೆಲಸ ಸಂಬoದಪಟ್ಟ ಅಧಿಕಾರಿಗಳು ಮಾಡಬೇಕಿದೆ. ಅಂಗಡಿ ವರ್ತಕರು, ಪೋಲಿಸ್ ಸಿಬ್ಬಂದಿ ಹಾಗೂ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಯವರು ಈ ಕಡೆ ಗಮನಹರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಕಟ್ಟುನಿಟ್ಟಾಗಿ ಸೂಚಿಸುವ ಕೆಲಸ ಮಾಡಬೇಕಿದೆ.
ಈ ಸಂದರ್ಬದಲ್ಲಿ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಪುರಸಭೆ ಸದಸ್ಯ ರಮೇಶ ಖೇತಗೌಡರ, ಕೆಂಚಪ್ಪ ಹಳಿಂಗಳಿ, ಬಸವರಾಜ ಯಡವಣ್ಣವರ, ಲಕ್ಕಪ್ಪ ಪೂಜೇರಿ, ಮಹೇಶ ಚೌಗಲಾ, ಮಹಾದೇವ ಶೇಗುಣಸಿ ಹಾಗೂ ಪುರಸಭೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು
Share
WhatsApp
Follow by Email