ಕೋರೊನ ವೈರಸ್ ಹರಡದಂತ್ತೆ ಮುಂಜಾಗ್ರತ ಕ್ರಮವಾಗಿ ರಾಸಾಯನಿಕ ಕೀಟನಾಶಕ ಔಷಧಿ ಸಿಂಪಡಣೆ.

ಮುಗಳಖೋಡ: ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ ೧೪ ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಮ್ಮುಖದಲ್ಲಿ ಹಾಗೂ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಈ ಕೋರೊನ ವೈರಾಣು ಬರಬಾರದೆಂದು ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತ್ತೆ ಮುಂಜಾಗೃತ ಕ್ರಮವಾಗಿ ಪಟ್ಟಣದ ಬಜಾರ್, ರೇಣುಕಾಚಾರ್ಯ ನಗರ, ಜೈ ನಗರ, ಆದರ್ಶ ನಗರ, ಸರ್ಕಲ್ ಸೇರಿದಂತ್ತೆ ಪಟ್ಟಣದ ವಿವಿದ ನಗರಗಳಲ್ಲಿ ಈ ರಾಸಾಯನಿಕ ಕೀಟನಾಶಕ ಔಷಧಿಯನ್ನು ಸಿಂಪಡಿಸಲಾಯಿತು.
ಈ ಸಂದರ್ಬದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ್, ಪುರಸಭೆ ಸದಸ್ಯರಾದ ಸದಾಶಿವ ಕರೆಪ್ಪಗೋಳ, ಆನಂದ ಗಂಧ, ಪಟ್ಟಣದ ನಿವಾಸಿಗಳಾದ ಶಂಕರ ಕೋಳಿ, ಸುಭಾಸ ಹೋಸಮಣಿ, ನೇಹಲ್ ಸನ್ನ್ನಾಯಿಕ, ಅಮೀತ್ ಪರೀಟ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಉಪಸ್ಥಿತರಿದ್ದರು.
Share
WhatsApp
Follow by Email