ಸಾಂಗ್ಲಿಯಲ್ಲಿ 12 ಕೋರೋನ ಪ್ರಕರಣ :ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕಿಸುವ ರಸ್ತೆಯನ್ನು ಬಂದ್

ಅಥಣಿ : ಸಾಂಗ್ಲಿಯಲ್ಲಿ 12 ಕೋರೋನ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನೆರೆಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ  ರಸ್ತೆಗೆ ಅಡ್ಡಲಾಗಿ ಮಣ್ಣಿನ ಗುಡ್ಡೆ ಮುಳ್ಳುಕಂಠಿ ಹಾಕಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಯಿತು . 
ಗ್ರಾಮಕ್ಕೆ  ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನ ಆಗಮಿಸದಂತೆ ವಾಹನಗಳು ಆಗಮಿಸದಂತೆ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ ರಸ್ತೆ ಬಂದ್ ಮಾಡಿ ಬೋರ್ಡ್ ಹಾಕಿ ಹೊರಗಿನ ಜನರು ಒಳಗೆ ಪ್ರವೇಶಿಸದಂತೆ ನಿರ್ಬಂಧ ಮಾಡಿದ್ದಾರೆ .  ಒಟ್ಟಾರೆ ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದ ಸೀಮೆಯನ್ನು ಮಾಡುವ ಮೂಲಕ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ.ಮಹಾಮಾರಿ ಕೊರೊನಾದ ಬಗ್ಗೆ ಜಾಗೃತರಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಐಗಳಿ ಪೊಲೀಸ್ ಠಾಣೆಯ ಪಿಎಸ್ಐ ಕೆಎಸ್ ಕೊಚೇರಿ ಹಾಗೂ ಪಿಡಿಓ ಡಾ ಕಾಡೇಶ ಅಡಹಳ್ಳಿ  ಗ್ರಾಮಸ್ಥರಾದ ರಘುನಾಥ ದೊಡ್ಡನಿಂಗಪ್ಪಗೋಳ ಸೇರಿದಂತೆಗ್ರಾಮ ಪಂಚಾಯಿತಿ ಸಿಬ್ಬಂದಿ  ಉಪಸ್ಥಿತರಿದ್ದರು
Share
WhatsApp
Follow by Email