ಜನರು ತಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ : ಶಾಸಕ ಎ ಎಸ್ ಪಾಟೀಲ್

ಮುದ್ದೇಬಿಹಾಳ :ಪಟ್ಟಣದ ತಮ್ಮ ದಾಸೋಹ ಭವನ ನಿವಾಸದಲ್ಲಿ ಶುಕ್ರುವಾರ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಮಾತನಾಡಿದರು.
ಸಾರ್ವಜನಿಕರೆ ತಮ್ಮ ಜೀವದ ಆರೋಗ್ಯದ ಹಿತದೃಷ್ಠಿಯಿಂದ ಸರಕಾರದ ಆದೇಶದಂತೆ ತಾವು ಗಂಜಿ ಕುಡಿದರೂ ಪರವಾಗಿಲ್ಲ ಆದರೇ ಈ ಮಹಾಮಾರಿ ಕೋರೋನಾ ವೈರಸ್ ನಿಂದ ತಪ್ಪಿಸಿಕೊಳ್ಳಲು 21 ದಿನಗಳ ಕಾಲ ತಮ್ಮ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದ ತಮ್ಮ ದಾಸೋಹ ಭವನ ನಿವಾಸದಲ್ಲಿ ಶುಕ್ರುವಾರ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಇಡೀ ವಿಶ್ವವೇ ಈ ಕೋರೋನಾ ವೈರಸ್ ಗೆ ನಡುಗಿದೆ ಮಾತ್ರವಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜೀವ ಪಡೆದುಕೊಂಡಿದೆ.
ಈ ಹಿನ್ನೇಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋರೋನಾ ಮುಕ್ತವನ್ನಾಗಿಸಲು ಸಧ್ಯ ಇಡೀ ದೇಶಕ್ಕೆ ಲಾಕ್ ಡಾನ್ ಮಾಡಿದ್ದಾರೆ ಸಾರ್ವಜನಿಕರು ಅರ್ಥೈಸಿಕೊಳ್ಳಬೇಕು.
ಎಲ್ಲೇಂದರಲ್ಲಿ ಗುಂಪು ಗುಂಪಾಗಿ ನಿಲ್ಲುವುದು, ಸಭೇ ಸಮಾರಂಭ, ಮದುವೆ ಸೇರಿದಂತೆ ಇನ್ನಿತರ ಜನಸಂಧಣಿಯಾಗುವ ಕಾರ್ಯಕ್ರಮಗಳಲ್ಲಿ ಜನರು ಬಾಗವಹಿಸುವುದನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸಬೇಕು. ಇದರಿಂದ ಒಬ್ಬರಿಂದ ಇನ್ನೋಬ್ಬರಿ ಹರಡುವ ಕೋರೋನ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಈಗಾಗಲೇ ಪಟ್ಟಣ ಸೇರಿದಂತೆ ಬಹುತೇಕ ತಾಲೂಕಿನ ಎಲ್ಲ ದೇವಸ್ಥಾನ, ಮಸ್ಜಿದಿಗಳ, ಚರ್ಚಗಳ ಮುಚ್ಚಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಈ ಕಾರ್ಯಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಹೋರ ರಾಜ್ಯ ಹಾಗೂ ಅಂತರ ಜಿಲ್ಲೇಗಳಿಂದ ತಾಲೂಕಿಗೆ ಬರುವ ಜನರ ಮೇಲೆ ಹೆಚ್ಚು ನಿಗಾವಹಿಸಿ ಕೋರೋನಾ ಸೊಂಕು ತಗುಲದಂತೆ ನೋಡಿಕೊಳ್ಳುವಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಮೈಯಲ್ಲ ಕಣ್ಣಾಗಿ ತಾಲೂಕಾ ಆರೋಗ್ಯ ಇಲಾಖೆ ಸೇರಿದಂತೆ ಸಂಭoದ ಪಟ್ಟ ಇಲಾಖೆ ಅಧಿಕಾರಿಗಳ ಕರ್ತವ್ಯ ನಿರ್ವಹಿಸಬೇಕು.
ಲಾಕ್ ಡಾನ್ ವೇಳೆ ಸಾರ್ವಜನಿಕರಿಗೆ ಅಗತ್ಯ ಜೀವನಾಂಶಕ ವಸ್ತಗಳನ್ನು ಖರಿದಿಸಲು ಕಿರಾಣಿ, ದಿನಸಿ, ತರಕಾರಿ, ಹಾಲು ಸೇವೆ ನಿಗದಿತ ಸಮಯಕ್ಕೆ ದೊರಕುವಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೇಖೇಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು.
ಜೊತೆಗೆ ಕಿರಾಣಿ, ದಿನಸಿ ಅಂಗಡಿ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ ಹಾಗಾಗಿ ಅಂತ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ತಹಶಿಲ್ದಾರ ಜಿ ಎಸ್ ಮಳಗಿಯವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಕೃಷಿ ಚಟುವಟಿಕೆ ಪ್ರಾರಂಭಿಸಲು ಸರಕಾರ ಸಂಪೂರ್ಣ ಅನುಮತಿ ನೀಡಿದ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಬೀಜ ಗೊಬ್ಬರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲುವಲ್ಲಿ ಪ್ರಯತ್ನಿಸಬೇಕು.
ಅದರಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರಿಗೆ ರೈತರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ಸಲುವಾಗಿ ಇಗಾಗಲೇ ಸರಕಾರ ಟಾಸ್ ಪೋರ್ಸ್ ಯೋಜನೆ ಮೂಲಕ ವಿಶೇಚ ಅನುದಾನ ನೀಡಿದೇ ಕಾರಣಎಲ್ಲೇಲ್ಲಿ ನೀರಿನ ಸಮಸ್ಯೆ ಇದೇ ಅಲ್ಲಿಗೆ ಹೋಗಿ ಸಮಸ್ಯೆ ಆಲಿಸಿ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು.
ಇತ್ತಿಚಿಗೆ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಕಳ್ಳಬಟ್ಟಿ ದಂಧೆ ಮಿತಿಮಿರಿದೇ ಕಾರಣ ಕಳ್ಳಬಟ್ಟಿ ತಯಾರಿಕೆ ಮಾಡಿ ಮಾರಾಟಮಾಡುವವರ ವಿರುದ್ದ ಕಠೀಣ ಕಾನೂನು ಕ್ರಮ ಜರುಗಿಸಬೇಕು ಅದರಂತೆ ಬಹುತೇಕ ಪಿಡಿಓಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಕ ಅಧಿಕಾರಿ ಶಶಿಕಾಂತ ಶಿವಪುರೆ ಅವರಿಗೆ ಸೂಚಿಸಿದರು.
ಈ ವೇಳೆ ತಹಶಿಲ್ದಾರ ಜಿ ಎಸ್ ಮಳಗಿ, ತಾಳಿಕೋಟಿ ತಹಶಿಲ್ದಾರ ಅನೀಲ ಢವಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಸಿಪಿಐ ಆನಂದ ವಾಗ್ಮೋರೆ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ,ತಾಳಿಕೋಟೆ ಪಿಎಸೈ ಬಂಡೆಗಾರ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email